ಅವಳು

ಕಾದ ಬಿಸಿಲಿನ ಝಳದಲಿ
ಅವಳು ಬೆವರ ಹನಿಗಳು
ಹೊತ್ತು ಸಾಗಿದ್ದಾಳೆ ಆಯಾಸದಲಿ
ಹೊರೆಯಲಿ ಆ ದಿನದ ಒಲೆಯ ಕಾವಿದೆ.

ಆಡದ ಮಾತುಗಳು ನೂರಿವೆ
ತೋರಗೊಡುವದಿಲ್ಲ ಅವಳು
ಮುಖದ ನೆರಿಗೆಗಳಲಿ ಮಿಡಿದ
ಯಾರೇನು ಮಾಡಲಾಗದ ಭಾವ ಕಂದೀಲಿನಲಿ.

ಹೊರುವದೆಲ್ಲವ ಹೊರಬೇಕು
ಗುಡಿಸಲ ಮಧ್ಯೆದಲಿ ಮಕ್ಕಳ ಗುಂಪು
ತಾನಾಗಿ ಬಂದ ಹಗಲಿನ ಹಸಿವು
ರಾತ್ರಿ ಹಿಂಗುತ್ತದೆ ಸೂರ್ಯ ಮುಖ ಮರೆಯಿಸಿದ್ದಾನೆ.

ಅವಳ ಕೂಗು ಯಾರಿಗೂ ಕೇಳಿಸುವದಿಲ್ಲ.
ಹೊರಗೆ ಬರೀ ಗೌಜು ಗದ್ದಲ
ಮೇಜು ಕುಟ್ಟುವವರಿಗೆ ತನಗಾದ್ದು ಮಾತ್ರ
ಕೇಳಿಸುತ್ತದೆ ದೂರುಗಳಿಲ್ಲದೇ ಅವಳು ಸರಿದು ಹೋಗಿದ್ದಾಳೆ.

ಆಡಿದರೆ ಒಂದೂ ಮಾತು ಧ್ವನಿಯಾಗುವದಿಲ್ಲ
ಆಡದೇ ಉಳಿದರೆ ಎದೆ ಸುಡುವ ದಾಹ
ಮೌನ ಕಡೆಯ ಮಾತೆಂದು ಸುಮ್ಮನಾಗಿ
ಇನ್ನೊಮ್ಮೆ ಹೇಳಿದರಾಯ್ತು ಎಂದು ನಡೆದಿದ್ದಾಳೆ ಅವಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಗ ಬದಲಾದರು ಜೀವನ ಬದಲದು!
Next post ಏಕಾಂತ

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

cheap jordans|wholesale air max|wholesale jordans|wholesale jewelry|wholesale jerseys